19 ಆಗಸ್ಟ್ 2025

19 ಆಗಸ್ಟ್ 2025

1. ಕರ್ನಾಟಕದಲ್ಲಿ ಹೃದಯಾಘಾತದ ಹೆಚ್ಚಳಕ್ಕೆ ಸಂಬಂಧಿಸಿದ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ ?
1. ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರೇ ಹೆಚ್ಚಾಗಿದ್ದಾರೆ.
2. ಹೃದಯಾಘಾತಕ್ಕೆ ಪ್ರಮುಖ ಕಾರಣಗಳು ಬದಲಾದ ಜೀವನಶೈಲಿ, ಆಹಾರ ಕ್ರಮ ಮತ್ತು ಜಾಗೃತಿಯ ಕೊರತೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
3. ಮಂಗಳೂರು, ಬೆಂಗಳೂರು ಮತ್ತು ಹೊಸಪೇಟೆ ಆಸ್ಪತ್ರೆಗಳಲ್ಲಿ ಹೊಸ ಕ್ಯಾತ್‌ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು.
4. ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯಡಿ, ಸರ್ಕಾರವು 30 ವರ್ಷ ಮೇಲ್ಪಟ್ಟವರಿಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡಕ್ಕೆ ತಪಾಸಣೆ ನಡೆಸುತ್ತಿದೆ.

a) ಕೇವಲ 1 ಮತ್ತು 4
b) ಕೇವಲ 2 ಮತ್ತು 3
c) ಕೇವಲ 1, 2 ಮತ್ತು 3
d) ಕೇವಲ 2, 3 ಮತ್ತು 4

2. ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಗೌರವವು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗೆ ಯಾವ ಕಾರಣಕ್ಕಾಗಿ ಲಭಿಸಿದೆ?

a) ಹೊಸ ಬಸ್ಸುಗಳ ಸೇರ್ಪಡೆಗಾಗಿ
b) ಅತೀ ಹೆಚ್ಚು ಸಿಬ್ಬಂದಿ ನೇಮಕಾತಿಗಾಗಿ
c) ‘ಶಕ್ತಿ ಯೋಜನೆ’ಯ ಯಶಸ್ವಿ ಅನುಷ್ಠಾನಕ್ಕಾಗಿ
d) ಅತ್ಯುತ್ತಮ ನಿರ್ವಹಣಾ ವ್ಯವಸ್ಥೆಗಾಗಿ

3. ಭಾರತದ ಅತಿದೊಡ್ಡ ಹಸಿರು ಅಮೋನಿಯಾ ಘಟಕವನ್ನು ಎಲ್ಲಿ ಸ್ಥಾಪಿಸಲಾಗುತ್ತಿದೆ?

a) ಬೆಂಗಳೂರು, ಕರ್ನಾಟಕ
b) ಪಾಣಿಪತ್, ಹರಿಯಾಣ
c) ಪಂಜಾಬ್
d) ಚೆನ್ನೈ, ತಮಿಳುನಾಡು

4. ಹಸಿರು ಅಮೋನಿಯಾ ಉತ್ಪಾದನೆಯಲ್ಲಿ ಯಾವ ಪ್ರಕ್ರಿಯೆಯನ್ನು ಬಳಸಲಾಗುತ್ತದೆ?

a) ಕಲ್ಲಿದ್ದಲಿನ ಹಸಿರು ಅನಿಲೀಕರಣ
b) ಪೆಟ್ರೋಲಿಯಂ ಸಂಸ್ಕರಣೆ
c) ಎಲೆಕ್ಟ್ರೋಲಿಸಿಸ್ ಮತ್ತು ಹ್ಯಾಬರ್-ಬಾಷ್ ಪ್ರಕ್ರಿಯೆ
d) ನೈಸರ್ಗಿಕ ಅನಿಲದಿಂದ ಉತ್ಪಾದನೆ

5. ಪ್ರೈಮರಿ ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್ (PAM) ಎಂಬ ಮಾರಣಾಂತಿಕ ಕಾಯಿಲೆಗೆ ಕಾರಣವಾಗುವ ಅಮೀಬಾದ ಹೆಸರೇನು?

a) ನಾಗ್ಲೇರಿಯಾ ಫೌಲೇರಿ
b) ಎಂಟಮೀಬಾ ಹಿಸ್ಟೋಲಿಟಿಕಾ
c) ಜಿಯಾರ್ಡಿಯಾ ಲ್ಯಾಂಬ್ಲಿಯಾ
d) ಅಕಾಂಥಮೀಬಾ ಕೆರಾಟೈಟಿಸ್